ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು
ಇಂದೇಕೆ ಪಸರಿಸುವ ಮನಸ್ಸು ಬಂತು ಹೂವಿಗೆ ನಿನ್ನೆಯ ದಿನ ಬಿಸಿಲಿಗೆ ಬಾಡುತ್ತಿದ್ದ ಹೂವು
ಇಂದೇಕೆ ತಲೆದೂಗುತ್ತಿದೆ ಕೋಗಿಲೆ ಹಾಡಿಗೆ ನಿನ್ನೆಯ ದಿನ ಬಿಸಿಲಿಗೆ ಬೇಸರಿಸುವ ಬೇಗೆ
ಇಂದೇಕೆ ರಂಜಿಸುತ್ತಿದೆ ಜಲಧಾರೆ ತಂಪಿಗೆ ನಿನ್ನೆ ಒಲವಿಲ್ಲದ ಬಳ್ಳಿ ಬೇಡುತ್ತಿದೆ
ಇಂದು ಮರದ ಆಸರೆ. ನಿಲುವಿಲ್ಲದ ನಿನ್ನೆಯಲಿ ನಲಿಯು ತುಂಬಲಿ ಇಂದು
ನಿನ್ನೆಯ ದಿನವೆಂಬ ಕರಾಳ ಕಳೆದು ಇಂದಿಗಮೃತವ ಜಯಿಸಲಿ ಈ ಧರಣಿ ಮಾನವ ಸ್ನೇಹಕೆ ಇಲ್ಲಿ ಕೊನೆಯಾಗದಿರಲಿ
ನಿರಂತರ ತುಂಬಿ ಅಕ್ಷಯವಾಗಲಿ ಈ ಗಣಿ -ಸ್ಯಾಂಡಿ ಚಿತ್ರ ಕೃಪೆ: ಇಂಟರ್ನೆಟ್ ತಾಣ