ಯೌವನವು ಜಾರಿದಾಗ…
ಬರಹಗಾರರ ಬಳಗ
ಡಿಸೆಂಬರ್ ೩೦, ೨೦೨೫
೨೩ ವೀಕ್ಷಣೆಗಳು
ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ
ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ
ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು
ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿಂದು
ಮೂಲೆ ಕೋಣೆಯಲಿ ಕಂಬ ಹಿಡಿದು ಮಲಗಿದ್ದೆ ನಾನು ಅಲ್ಲಿ
ಮಗುವೊಂದು ಬಂದು ಕೈಯನ್ನು ಮುಗಿದು ಕುಳಿತಿತ್ತು ಪಕ್ಕದಲ್ಲಿ
ಮನೆಯೊಡತಿ ಸಿಡುಕಿ ಬೈಯುತ್ತ ನಿಂದು ಕೆಕ್ಕರಿಸಿ ಕುಣಿದಳಿಂದು
ವೇದನೆಯ ಜೊತೆಗೆ ಒಡಲೆಲ್ಲ ಬೆಂದು ಹುಸಿಯಾಯ್ತು ಸ್ವರ್ಗವಿಂದು
ಯಾರ ಬಳಿಯಲಿ ಹೇಳಲೇನು ಮೈಮನಕೆ ಸೋಲು ಇಲ್ಲಿ
ಛಲವು ಇಲ್ಲದೆ ಬುದ್ಧಿ ಒಣಗಿದೆ ಮೌನ ಮುಸುಕಿತಿಲ್ಲಿ
ಸಂಸಾರ ಸುಖಕೆ ಎಲ್ಲವನು ನೀಡುತಲೆ ಸೋತು ಹೋದೆನಿಂದು
ಮುಂದೊಂದು ದಿನಕೆ ಕಾಯುತ್ತಲಿರುವೆ ಕರೆದೊಯ್ವ ಬರುವನೆಂದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬