ಹನಿಗಳು ಸರ್ ಹನಿಗಳು !
ಬರಹಗಾರರ ಬಳಗ
ಫೆಬ್ರವರಿ ೧೧, ೨೦೨೬
೩ ವೀಕ್ಷಣೆಗಳು
ಬರಹ
ಕ್ಕೆ
ಬರ
ಬರಬಾರದು !
*
ಬರಹದ
ತೂಕ
ಕಳಕೊಂಡ
ಕ್ಷಣ
ಬರಹಗಾರ
ಮೌನಿ !
*
ಬರಹಗಳಲ್ಲಿಯ
ದೋಷಗಳ
ಹೇಳಿ
ಸ್ನೇಹ
ಕಳೆದುಕೊಳ್ಳಬೇಡಿ !
*
ಕಪ್ಪು
ಬೊಟ್ಟಿಗೂ
ಮಹತ್ವ
ಇದೆ
ಗ್ರಹಣ
ಬಂದಾಗ !
*
ಚಿಂತಕರ
ಚಿಂತನೆ
ಓದುಗರಿಗೆ
ಮಾತ್ರ !
*
ಈಗಿನ ಯುವ ಜನತೆ, ಜೊತೆಗೆ
ನಮಗೆಲ್ಲ ಬಹಳ ತಿಳಿದಿದೆ
ಎನ್ನುವವರ ನಡುವೆ
ಹಿರಿಯರೆಂದೆನಿಸಿಕೊಂಡವರು
ಸುಮ್ಮನೆ ಇರುವುದೇ ಲೇಸು!
*
ಬದುಕಲ್ಲಿ
ಕತೆಗಳು
ಸೃಷ್ಟಿಯಾಗಲಿ ,
ನೋಡು
ನೋಡುತ್ತಾ
ಬಾಳೊಂದು
ಕಾದಂಬರಿಯಾಗುತ್ತದೆ !
*
ಒಂದು ಕಡೆ ಗಂಡ
ಇನ್ನೊಂದು ಕಡೆ
ಹಣದ ಚೀಲವಿಟ್ಟು
ಹೆಣ್ಣನ್ನು ಬಿಟ್ಟಲ್ಲಿ
ಮೊದಲು
ಹಣದ ಚೀಲವ
ಪಡೆದು
ನಂತರವೇ
ಗಂಡನ ಕೈ ಹಿಡಿದು
ಮುನ್ನಡೆವಳು
ಸತಿಯು !
*
ಕೂಸುಗಳಲ್ಲಿ
ನೂರಾರು ಕನಸಿದೆ
ಕಾಸುಗಳಲ್ಲೂ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೧೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬