ಎಚ್ಚರ ಓದುಗ ಎಚ್ಚರ!
ಬರಹಗಾರರ ಬಳಗ
ಫೆಬ್ರವರಿ ೨೮, ೨೦೨೬
೭ ವೀಕ್ಷಣೆಗಳು
ಇತ್ತೀಚಿನ ದಿನಗಳಲ್ಲಿ ,
ಕವಿಯೆನಿಸಿದ
ಬುರುಡೆ ದಾಸನು
ತಾನೊಬ್ಬನೇ
ಬರೆಹಗಾರ
ಎನ್ನುತ್ತಾ,
ಗಲ್ಲಿ ಗಲ್ಲಿಗಳಲ್ಲಿ
ಎಲ್ಲೆಂದರಲ್ಲಿ
ಏನೇನೋ
ಬರೆಯುತ್ತಾ
ತಿರುಗುತ್ತಿದ್ದಾನೆ
ಎಚ್ಚರ ಓದುಗ ಎಚ್ಚರ !
ತನುವೊಳಗೆ
ತಾನೊಬ್ಬನೇ ಸುಬಗ
ಬರಹಗಾರನು ಎನ್ನುತ್ತಾ,
ಬೆಳೆಯುತ್ತಿರುವ ಇನ್ನೊಬ್ಬನ
ತುಳಿಯಲು ಉಪಯೋಗಿಸುವ
ತನ್ನ ಲೇಖನಿಯ !
ಕೊನೆಗೆ
ವಟಗುಟ್ಟುವ ಕಪ್ಪೆಯಂತೆ
ಬಾವಿಯೊಳಗೇ
ಉಳಿಯುವನವನು
ಎಚ್ಚರ ಓದುಗ ಎಚ್ಚರ !
ವಿದ್ಯೆ, ಕಲಿತರೂ
ಇವನಿಗೆ
ಬುದ್ದಿ ಬರಲಿಲ್ಲ,
ಬುದ್ದಿ ಬರುವಾಗ
ವಿದ್ಯೆ ಮರೆತನಂತೆ
ಮತ್ತೆ ಕೇಳಬೇಕೇ ?
ಬರೆದ ಬರೆಹಗಳೆಲ್ಲ
ತೌಡು ಕುಟ್ಟಿದಂತೆ
ಎಚ್ಚರ ಓದುಗ ಎಚ್ಚರ!
ಅಹಂನಿಂದ ಹೊರ ಬಾ
ಕಲಿತಿರುವುದಕ್ಕೆ,
ಕಲಿಸಿದವರಿಗೆ ಶರಣಾಗು
ಪುಡಿ ಬರಹಗಾರರ ಕೂಟಕ್ಕೆ
ನೀನು, ಸೇರದಿರು
ಕಾರಣ ನೂರಾರು ಕೊಡಬಲ್ಲೆ !
ಏನೋ ಲಾಗ ಹೊಡೆದು
ಹೊರತಂದಿರುವ ಪುಸ್ತಕಗಳು
ಮನೆಯ ಕಪಾಟಿನಲ್ಲಿ
ಓದುಗರಿಲ್ಲದೆ ಬೂಸಾ ಆಗಿರಬಹುದು ?
ಎಚ್ಚರ ಓದುಗ ಎಚ್ಚರ!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೨೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬