ಬದುಕೇ ಬವಣೆಯೆಂದು ಹೇಳುತ್ತೇವೆ ತಾಳ್ಮೆಯೆಂದೂ ಇರದೆಯೇ ಬಾಳುತ್ತೇವೆ ಕನಸು ನನಸುಗಳ ಜೊತೆ ಜೋತೆಯಲಿ  ಲೋಕವನು ಬಿಡುತ ಹಾಗೇ ತೆರಳುತ್ತೇವೆ  * ಕೋಟು ಧರಿಸಿ ಕೋಟಿಯೊಡನೆ  ತಿರುಗುವವಗೆ ದಾನ ಮಾಡಬೇಕು  ಎಂಬಾಸೆ ಇರದೆ  ಮತ್ತಷ್ಟೂ ಗಳಿಸಬೇಕು  ಎಂಬಾಸೆ ಇರುತ್ತದೆ. ಅದೇ, ಕೋಟಿಲ್ಲದೆ  ತುತ್ತು ಅನ್ನಕ್ಕೂ  ಗತಿ ಇಲ್ಲದವನಿಗೆ  ದುಡಿದು ತಿನ್ನುವ ಜೊತೆಗೆ  ಇದ್ದುದರಲ್ಲೇ  ದಾನ ಮಾಡಬೇಕು  ಎಂಬಾಸೆ ಇರುತ್ತದೆ! * ಮನವಿಹುದು ತನುವೊಳಗೆ ,ನೀನು ತಿಳಿಯಾಗಿಸು ! * ಹಳಿಯ ಮೇಲೆ ಸಾಗಿದಂತೆ , ನೀ ರೈಲು ಬಿಡಬೇಡವೊ ! * ಕಣ್ಣೀರಿನಲ್ಲಿ ಕೈ ತೊಳೆದೆ ನಾನಿಂದು ನೀನೆಲ್ಲಿ ಸಿಂಧೂ ! * ಗಂಡಸು ಇಂದು ರಮಣಿಯ ಎದುರು ಒಣ ಕೊಂಬೆಯು ! -ಹಾ. ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ