ಚೆನ್ನೈನ ಹಳೆಯ, ಭವ್ಯವಾದ ಮನೆಯೊಂದರಲ್ಲಿ ರಾಜೇಂದ್ರ ಎಂಬ ವ್ಯಾಪಾರಿ ವಾಸಿಸುತ್ತಿದ್ದ. ಆ ಮನೆಯ ಲೈಬ್ರರಿಯಲ್ಲಿ ಶತಮಾನಗಳಷ್ಟು ಹಳೆಯ ಪುಸ್ತಕಗಳಿರುವುದು ಅವನ ಹೆಮ್ಮೆ. ಒಂದು ರಾತ್ರಿ, ಧೂಳಿನಿಂದ ಮುಚ್ಚಿದ್ದ ಒಂದು ಡೈರಿಯನ್ನು ಕಂಡ. ಅದರ ಒಳಗೆ ಕೈಬರಹದಲ್ಲಿ: "ನನ್ನನ್ನು ಕೊಂದವನು ನನ್ನ ಆತ್ಮೀಯನೇ. ಆದರೆ ಯಾರೆಂದು ತಿಳಿಯಲಿಲ್ಲ." ಎಂದು ಬರೆದಿತ್ತು. ರಾಜೇಂದ್ರನ ಆಸಕ್ತಿ ಕುದುರಿತು. ಡೈರಿಯ ಪುಟಗಳು ೬೦ ವರ್ಷಗಳ ಹಿಂದಿನ ಕೊಲೆಯ ರಹಸ್ಯವನ್ನು ಬಿಚ್ಚಿಡುತ್ತಿದ್ದವು. ಆದರೆ ಕೊನೆಯ ಪುಟಗಳು ಒಂದಕ್ಕೊಂದು ಅಂಟಿಕೊಂಡಿದ್ದವು, ಅದನ್ನು ಬಿಡಿಸಲು ಬಹಳ ಶ್ರಮ ಪಟ್ಟರೂ ಆಗಲಿಲ್ಲ. ರಹಸ್ಯ ಅರ್ಧಂಬರ್ಧವಾಗಿತ್ತು. ತನ್ನ ಸ್ನೇಹಿತ ಸುರೇಶ್‌ಗೆ ತೋರಿಸಿದಾಗ, ಅವನು ಹೇಳಿದ, "ಈ ಮನೆಯಲ್ಲಿ ಒಂದು ಕೊಲೆ ನಡೆದಿತ್ತು. ಈ ಡೈರಿಯಲ್ಲಿ ಹೇಳಿದ್ದೇ ಆಗಿರಬಹುದು." ಆ ರಾತ್ರಿಯಿಂದ, ಮನೆಯಲ್ಲಿ ವಿಚಿತ್ರ ಘಟನೆಗಳು ಆರಂಭವಾದವು. ಮೆಟ್ಟಿಲುಗಳಲ್ಲಿ ಕಾಲಿನ ಸಪ್ಪಳ, ದೀಪಗಳು ತಾವಾಗಿಯೇ ಆರಿಹೋಗುವುದು, ಕನಸಿನಲ್ಲಿ ಒಬ್ಬ ವ್ಯಕ್ತಿಯ ಧ್ವನಿ: "ನನ್ನ ರಹಸ್ಯವನ್ನು ಕಂಡುಹಿಡಿ!" ರಾಜೇಂದ್ರ ಭಯಗೊಂಡರೂ, ಕುತೂಹಲದಿಂದ ತನಿಖೆ ಆರಂಭಿಸಿದ. ಸುರೇಶ್‌ನೊಂದಿಗೆ ಹಳೆಯ ದಾಖಲೆಗಳನ್ನು ತಡಕಾಡಿದ. ಕೊಲೆಯಾದವನು ಆ ಮನೆಯ ಹಿಂದಿನ ಮಾಲೀಕ, ಆದರೆ ಕೊಲೆಗಾರನ ಹೆಸರು ಗುಪ್ತವಾಗಿತ್ತು. ರಾಜೇಂದ್ರ ಡೈರಿಯನ್ನು ಸುರಕ್ಷಿತವಾಗಿಡಲು ಲಾಕರ್ ಒಳಗೆ ಹಾಕಿದ. ಆದರೆ ಒಂದು ರಾತ್ರಿ, ಸುರೇಶ್ ಹೇಳಿದ, "ನೀನು ಆ ಡೈರಿಯನ್ನು ಓದಿದ್ದರಿಂದ, ಆ ಆತ್ಮವು ನಿನ್ನನ್ನು ಬಿಡದು." ಲಾಕ್ ಮಾಡಿದ ಬಾಗಿಲಿನಿಂದ ಧ್ವನಿಯೊಂದು ಕೇಳಿತು: "ನಾನು ನಿನ್ನ ಆತ್ಮೀಯನಂತೆ ಕಾಣುತ್ತೇನೆ, ಆದರೆ ನಾನಲ್ಲ." ಅಂತಿಮವಾಗಿ ಒಂದು ದಿನ ಪೊಲೀಸರು ತನಿಖೆಗೆ ಬಂದಾಗ, ಅಂಟಿಕೊಂಡಂತಿದ್ದ ಡೈರಿಯ ಕೊನೆಯ ಪುಟಗಳು ತೆರೆದುಕೊಂಡವು. ಅದರಲ್ಲಿ: "ಕೊಲೆಗಾರನು ನನ್ನ ಸಹೋದರ." ರಾಜೇಂದ್ರ ಆಘಾತದಿಂದ ಸುರೇಶ್‌ನತ್ತ ನೋಡಿದ—ಅವನ ಮುಖವು ಆತನ ಸಹೋದರನಂತೆ ಕಾಣುತ್ತಿತ್ತು! ಆ ಕ್ಷಣದಲ್ಲಿ, ಒಂದು ಶಕ್ತಿಯು ಸುರೇಶ್‌ನನ್ನು ಎಳೆದೊಯ್ದಂತಾಯಿತು. ರಾಜೇಂದ್ರ ಆ ಮನೆಯನ್ನು ತೊರೆದು ಹೋದವನು ಮತ್ತೆ ಎಂದಿಗೂ ಹಿಂತಿರುಗಲಿಲ್ಲ! ಮೂಲ : ತಮಿಳಿನ ಅನಾಮಿಕ ಕಥೆಗಾರ ತಮಿಳಿನಿಂದ ಅನುವಾದಿಸಿ ಕನ್ನಡದಲ್ಲಿ ಹೇಳಿದ್ದು; ರಾಜಾಮಣಿ ಚಿತ್ರ ಕೃಪೆ: ಅಂತರ್ಜಾಲ ತಾಣ