ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೯
ಕೆ.ಪಿ.ಅಶ್ವಿನ್ ರಾವ್
ಅಕ್ಟೋಬರ್ ೨೯, ೨೦೨೫
೧೦ ವೀಕ್ಷಣೆಗಳು
ಗುರಿ
ಮಾಮರದ ತುದಿಯಲ್ಲಿ
ಮಾಗಿರುವ ಹಣ್ಣು
ಪರಿಮಳವ ಸೂಸುತ್ತ
ಸೆಳೆಯುತಿದೆ ಕಣ್ಣು !
ವಾಸನೆಯ ಆಧರಿಸಿ
ಇರುವೆಗಳ ಸಾಲು
ಏರುತಿದೆ ಮರವನ್ನು
ಪಡೆಯಲಿಕೆ ಪಾಲು !
ಮರವನೇರಲು ಹೆಚ್ಚು
ಸಮಯ ಬೇಕದಕೆ
ಗುರಿಯ ಮುಟ್ಟುವ ಮೊದಲೆ
ಹಣ್ಣುದುರೆ ಕೆಳಕೆ !
ವಿಫಲವಾಗುವುದಲ್ಲಿ
ಇರುವೆಗಳ ಹಿಂಡು
ಸಫಲತೆಯ ಸಾಧಿಸಲು
ಸೋಲುಂಡ ದಂಡು !
ಶುಕವೊಂದು ಹಣ್ಣುಗಳ
ಕಡೆ ಹರಿಸಿ ದೃಷ್ಟಿ
ಗುರಿಯೆಡೆಗೆ ದಾಳಿಯನು
ಮಾದುವುದು ಕುಟ್ಟಿ !
ಇರುವೆ - ಶುಕಗಳ ಬಯಕೆ
ಗುರಿ ಕೂಡ ಒಂದೆ
ದಾರಿ ಮಾತ್ರವೆ ಬೇರೆ
ಸಫಲತೆಯ ಹಿಂದೆ !
ಬಳಸುದಾರಿಗೆ ಇರುವೆ
ಗಳ ಶ್ರಮವು ವ್ಯರ್ಥ
ಗೊಳಿಸಿದರೆ ಶುಕ ಶೀಘ್ರ
ಸಾಧನೆಗೆ ಕರ್ತ:
ಸಂಕಲ್ಪ ಸಾಧನೆಗೆ
ಇಹುದೆರಡು ದಾರಿ
ಒಂದು ಶುಕ, ಒಂದಿರುವೆ
ತುಳಿದಂಥ ದಾರಿ !
**
(ಈ ಕವನದೊಂದಿಗೆ ಕೆ ಪಿ ಭಟ್ಟರ ‘ಈ ಮರದ ನೆರಳಿನಲಿ’ ಕವನ ಸಂಕಲನದ ಕವಿತೆಗಳು ಮುಗಿದವು.)
ಪ್ರಕಟಿಸಿದ: ಅಕ್ಟೋಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬